ಹಿಂದೂ ಪುಸ್ತಕ ಶರಣಕುಮಾರ ಲಿಂಬಾಳೆ ಅವರು ಮರಾಠಿಯಲ್ಲಿ ಬರೆದ ಪುಸ್ತಕ, ಪ್ರಮೀಳಾ ಮಾಧವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಒಂದು ಸಮಕಾಲೀನ ರಾಜಕಾರಣದ ಗೋಸುಂಬೆತನವನ್ನು ವರ್ಣಿಸುವ ಕಾದಂಬರಿ. ದಲಿತರನ್ನು ಮನುಷ್ಯರೇ ಅಲ್ಲವೆನ್ನುವಷ್ಟರ ಮಟ್ಟಿಗೆ ಶೋಷಿಸಿ, ಜೊತೆಗೆ ದ್ವೇಷವನ್ನೂ ಸಾಧಿಸಿ ಮೇಲ್ವರ್ಗದವರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಅಮಾನವೀಯ ನಡವಳಿಕೆ ಪರಿಚಯಿಸಲ್ಪಟ್ಟಿದೆ. ದ್ವೇಷ-ತಿರಸ್ಕಾರ-ವ್ಯಂಗ್ಯ-ಪ್ರತೀಕಾರ ಕಾದಂಬರಿಯುದ್ದಕ್ಕೂ ವಿಜೃಂಭಿಸಿ ಸವರ್ಣೀಯರ ಹೊಲಸು ಮನಸ್ಸು ಸಂಪೂರ್ಣ ಅನಾವರಣವಾಗಿದೆ. ಮತಗಳ ಧಾರ್ಮಿಕ ಆಚರಣೆಗಳ ಮಧ್ಯೆಯೇ ಬಿರುಕು ಬಿಟ್ಟ ವ್ಯವಸ್ಥೆಯು ಜಾತಿ-ಜಾತಿಗಳ ಶ್ರೇಣೀಕರಣದ ವ್ಯವಸ್ಥೆಯೊಂದಿಗೆ ತಗುಲಿಕೊಂಡಾಗ ಆಗುವ ಅನಾಹುತಗಳು ಒಂದಲ್ಲ, ನೂರಾರು. ನಡುವೆ ಹೊತ್ತಿ ಉರಿಯುವ ಮನೆಯ 'ಗಳ' ಹಿರಿಯುವ ಮಂದಿಗೇನು ಸಮಾಜೋದ್ಧಾರದ ಕನಸೇನೂ ಇರುವುದಿಲ್ಲ ! ಎಂತೆಂತಹ ಚತುರ ಪಾತ್ರಗಳು ಇಲ್ಲಿ ಅನಾವರಣಗೊಂಡಿವೆ ಎಂದು ಓದಿ ನೋಡಿ. == ಬಾಹ್ಯ ಸಂಪರ್ಕ == ://..//Sharankumar_Limbale ಶರಣಕುಮಾರ ಲಿಂಬಾಳೆ